Sunday, October 12, 2014

HMM Award -“ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಪ್ರಶಸ್ತಿ”

“ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಪ್ರಶಸ್ತಿ”

ಜನವರಿ 2015ಕ್ಕೆ ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಗೆ 4 ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳಿಂದ ಕ್ರಿಯಾಶೀಲ ಲೇಖನಗಳನ್ನು ಆಹ್ವಾನಿಸಲಾಗುತ್ತಿವೆ. ಹಾಗೆಯೇ ಆಯ್ಕೆಯಾದ ಉತ್ತಮ ಲೇಖನಗಳನ್ನು ಸಮಾಜಕಾರ್ಯದ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು ಮತ್ತು ಆಯ್ಕೆಗೊಂಡ ಲೇಖನಕ್ಕೆ ಪ್ರೊ. ಎಚ್.ಎಂ.ಎಂ. ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ಪ್ರಶಸ್ತಿ ಪತ್ರದೊಂದಿಗೆ 5.000 ರೂ.ಗಳ ನಗದು ಹಣವನ್ನು ಒಳಗೊಂಡಿರುತ್ತದೆ.
 
ಲೇಖಕರ ಗಮನಕ್ಕೆ :-
1.       ಲೇಖನಗಳು ನಮ್ಮ ಸುತ್ತಮುತ್ತಲಿನ ಸಾಮಾಜಿಕ ಹಾಗೂ ಮಾನವೀಯ ನೆಲೆಗಟ್ಟಿಗೆ        ಸಂಬಂಧಿಸಿರಬೇಕು.  
2.      ಲೇಖನಗಳು ವಿಶ್ಲೇಷಣೆಗಳ, ಕಥೆಗಳ ಇತ್ಯಾದಿ ರೂಪದಲ್ಲಿನ ನೈಜ ಜೀವನ ಪರಿಸ್ಥಿತಿಯನ್ನು ಆಧಾರಿಸಿರಬೇಕು.
3.      ಅವಶ್ಯಕವಿದ್ದಲ್ಲಿ ಚಿತ್ರಗಳನ್ನು ಸೇರಿಸಬಹುದು.
4.      ಲೇಖನಗಳು 1500 ಪದಗಳನ್ನು ಮೀರಬಾರದು.
5.      ಲೇಖನಗಳು “Double Space” ನಲ್ಲಿ ಟೈಪ್‍ಸೆಟ್ ಮಾಡಿರಬೇಕು.
6.      ಇಂಗ್ಲೀಷ್ ಲೇಖನಗಳನ್ನು “Word Format” ನಲ್ಲಿ ಇಮೇಲ್ ಮಾಡಬೇಕು ಹಾಗೂ ಕನ್ನಡ              ಲೇಖನಗಳನ್ನು “Nudi Format” ನಲ್ಲಿ ಇಮೇಲ್ ಮಾಡಬೇಕು ಮತ್ತು ಟೈಪ್ ಮಾಡಿದಂಥ ಹಾರ್ಡ್         ಕಾಪಿಯನ್ನು ಪ್ರತ್ಯೇಕವಾದ A4 ಅಳತೆಯ ಪೇಪರ್‍ನಲ್ಲಿ ನಿರಾತಂಕ ವಿಳಾಸಕ್ಕೆ ಅಥವಾ ನಿರುತ          ಪಬ್ಲಿಕೇಷನ್ಸ್ ವಿಳಾಸಕ್ಕೆ ಕಳುಹಿಸಿ ಕೊಡಬೇಕು.
7.       ಲೇಖನಗಳಲ್ಲಿ ವ್ಯಾಕರಣ ಪದಪ್ರಯೋಗ ಸರಿಯಾಗಿರಬೇಕು. ಯಾವುದೇ ರೀತಿಯ ತಪ್ಪುಗಳಿರಬಾರದು.
8.      ಲೇಖನದ ಹಾರ್ಡ್ ಕಾಪಿಯೊಂದಿಗೆ ಬರಹಗಾರನ ಸರಿಯಾದ ಇಮೇಲ್ ಮತ್ತು ಅಂಚೆ ವಿಳಾಸ,      ದೂರವಾಣಿ ಸಂಖ್ಯೆ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹೊಂದಿದ “ಬಯೋಡೇಟ”ವನ್ನು   (ಸ್ವವಿವರ), “Samajakaryada Hejjegalu” ಹೆಸರಿನ  ರೂ. 100 ರ ಡಿ.ಡಿ.ಯೊಂದಿಗೆ  ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ :
ಸಮಾಜಕಾರ್ಯದ ಹೆಜ್ಜೆಗಳು
ನಂ. 244, 3ನೇ ಮುಖ್ಯರಸ್ತೆ, ಪೂರ್ಣಚಂದ್ರ ರಸ್ತೆ, ಎಂ.ಪಿ.ಎಂ.
ಬಡಾವಣೆ, ಅಂಬೇಡ್ಕರ್ ಕಾಲೇಜು ಎದುರು, ಮಲ್ಲತ್ತಹಳ್ಳಿ,
ಬೆಂಗಳೂರು – 560 056.   ದೂ : 080-23213710, 8064521470
ಇಮೇಲ್ : socialworkfootprints@gmail.com

Friday, October 10, 2014

ನಮ್ಮ ಸಮಯಕ್ಕೆ ಬೆಲೆ ಇಲ್ಲವೇ ?



ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಸರ್ಕಾರಿ ಕಚೇರಿಗಳಲ್ಲಿ ತಾಂಡವವಾಡುತ್ತಿದೆ. ಇತ್ತೀಚೆಗೆ ನನಗಾದ ಎರಡು ಅನುಭವಗಳು ಇದಕ್ಕೆ ನಿದರ್ಶನವಾಗಿವೆ. ಪ್ರತಿ ಕೆಲಸಕ್ಕೆ ನಿಗದಿತ ಮೊತ್ತ ನಿಗದಿ ಮಾಡಲಾಗಿದೆ. ಉದಾಹರಣೆಗೆ ಉದ್ದೇಶಿತ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿ. ಪ್ರಾರಂಭಿಸಲು ಒಂದು ಲಕ್ಷ ಪಹಣಿ ತಿದ್ದುಪಡಿ ಮಾಡಲು ಒಂದೂವರೆ ಲಕ್ಷ, ಮ್ಯಾರೇಜ್ ಸರ್ಟಿಫಿಕೇಟ್‍ಗೆ ಎರಡೂವರೆ ಸಾವಿರ ಮತ್ತು ಬಿಬಿಎಂಪಿ ಪ್ಲಾನ್ ಅಪ್ರೂವಲ್‍ಗೆ ಹನ್ನೆರಡು ಸಾವಿರ ಹೀಗೆ ಎಲ್ಲ ಕಡೆಗಳಲ್ಲಿ ಲಂಚ ನೀಡಲೇಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ.
ಇಂದು ಬೆಂಗಳೂರಿನ ಕಂದಾಯ ಭವನಕ್ಕೆ ವಿಶೇಷ ತಹಶೀಲ್ದಾರ್‍ರವರನ್ನು ನೋಡಲು ಹೊರಟೆ. ಹೊರಡುವ ಮುನ್ನ ಅಲ್ಲಿನ ಪ್ರಥಮ ದರ್ಜೆ ಸಹಾಯಕರಲ್ಲಿ ಸಾಹೇಬರು ಕಚೇರಿಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಂಡೆ ಹಾಗೂ ಅವರನ್ನು ಭೇಟಿ ಮಾಡಲು ಅಪಾಯಿಂಟ್‍ಮೆಂಟ್ ನೀಡುವಂತೆ ವಿನಂತಿಸಿದೆ. ಅಪಾಯಿಂಟ್‍ಮೆಂಟ್‍ ನೀಡಲು ನಿರಾಕರಿಸಿದರು. ನಾನು ಹೋಗುವಷ್ಟರಲ್ಲಿ ಬೆಳಗ್ಗೆ ಹನ್ನೊಂದು ಘಂಟೆ. ಸಾಹೇಬರು ಹೊರಗಡೆ ಹೋಗಿದ್ದರು. ಸಂಜೆ 5.30 ರ ತನಕ ಬರಬಹುದು ಎಂದು ಕಾದು ಕುಳಿತೆ. ಆದರೆ ಬರಲಿಲ್ಲ. ಹೀಗೆ ಸುಮಾರು ಹತ್ತು ಬಾರಿ ಈ ತಿಂಗಳಿನಲ್ಲಿ ಕಚೇರಿಗೆ ಅಲೆದಾಟವಾಗಿದೆ. ಒಂದೂವರೆ ತಿಂಗಳಿಂದ ನಮ್ಮ ಕೆಲಸ ಸಂಪೂರ್ಣವಾಗಿ ಪೂರ್ಣಗೊಂಡು ಸಾಹೇಬರ ಸಹಿಗಾಗಿ ಕಾದು ಕುಳಿತಿದೆ. ಇದು ಬಹುಪಾಲು ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಅನುಭವಿಸುವ ತಾಪತ್ರಯ. ಅಲ್ಲಿದ್ದ ಏಜೆಂಟರೊಬ್ಬರು ಸರ್ ಕೊಡುವುದನ್ನು ಕೊಟ್ಟುಬಿಡಿ ನಿಮ್ಮ ಕೆಲಸ ಒಂದು ದಿನದಲ್ಲಿ ಮಾಡಿಸಿಕೊಡುತ್ತೇನೆ ಎನ್ನುತ್ತಾರೆ. ಇದು ವಾಸ್ತವದ ಸಂಗತಿ.
ಲಂಚ ಕೊಡದಿದ್ದಲ್ಲಿ ಆಗಬೇಕಾದ ಕೆಲಸ ಒಂದು ವರ್ಷವಾದರೂ ಆಗುವುದಿಲ್ಲ. ಅದರ ಬದಲು ಲಂಚ ಕೊಟ್ಟು ಬೇಗ ಕೆಲಸ ಮಾಡಿಸಿಕೊಂಡರೆ ಸಮಯ ಉಳಿಸಬಹುದು ಎಂಬುದು ಅಲ್ಲಿದ್ದ ಏಜೆಂಟನ ಸಲಹೆ.
ಬೇರೆ ಕಡೆ ಇದ್ದ ಹಾಗೆ ಅಪಾಯಿಂಟ್‍ಮೆಂಟ್ ತೆಗೆದುಕೊಂಡು ಭೇಟಿ ಮಾಡಲು ಸರ್ಕಾರಿ ಕಚೇರಿಗಳಲ್ಲಿ ಏಕೆ ಸಾಧ್ಯವಿಲ್ಲ. ಬಹುಶಃ ಲಂಚ ಕೊಡುವವರಿಗೆ ಸಂಜೆ ಬೇರೆ ಬೇರೆ ಹೋಟೆಲ್‍ಗಳಲ್ಲಿ ಅಪಾಯಿಂಟ್‍ಮೆಂಟ್‍ ಸಿಗುತ್ತದೆಯಂತೆ.
ನನ್ನಂತೆಯೇ ಸುಮಾರು ಇಪ್ಪತ್ತು ಜನ ಸಾಹೇಬರ ಬರುವಿಕೆಗಾಗಿ ಬೆಳಗ್ಗೆಯಿಂದ ಸಂಜೆ 5.30 ರ ತನಕ ಕಾದು ಕುಳಿತಿದ್ದರು. ನಮ್ಮ ಸಮಯಕ್ಕೆ ಬೆಲೆ ಇಲ್ಲವೇ ?
ಲಂಚ ಕೊಡದೆ ಕೆಲಸ ಮಾಡಿಸಿಕೊಳ್ಳಲು ಯಾವುದಾದರೂ ಸಲಹೆಗಳಿದ್ದರೆ ನಮಗೆ ತಿಳಿಸಿ.

ರಮೇಶ್ ಎಂ.ಎಚ್.

ನಿರಾತಂಕ

Wednesday, October 8, 2014

ಜನಧನ

ಜನಧನ

ಜನಧನದಾನದೇಣಿಗೆಚಂದಾವಂತಿಗೆ ನಿರ್ದಿಷ್ಟ ಕೆಲಸವೊಂದಕ್ಕೆ ಸಮೂಹದಿಂದ ಹಣ ಸಂಗ್ರಹಿಸುವ ಪರಿಕಲ್ಪನೆಗಳಿವುಆಧುನಿಕ ಸಂದರ್ಭದಲ್ಲಿ ಕ್ರೌಡ್ ಫಂಡಿಂಗ್ ಸಹ ಅನಿಸಿಕೊಂಡಿದೆಕೆಲವೊಮ್ಮೆ ಕ್ರೌಡ್ ಫಂಡಿಂಗ್ ಕೆಲವೊಮ್ಮೆ ಹಣ ಉಚಿತ ಕೊಡುಗೆ ಆಗಿರುವುದರ ಬದಲಿಗೆ ಬಂಡವಾಳ ಹೂಡಿಕೆಯ ಸ್ವರೂಪ ಹೊಂದಿರುತ್ತದೆ ಪರಿಕಲ್ಪನೆ ಉಚಿತವಾಗಿ ನೀಡುವ ಹಾಗೂ ಇದೇ ಪರಿಕಲ್ಪನೆ ಬಂಡವಾಳ ಹೂಡಿಕೆ ಎಂದು ಅಂದುಕೊಂಡು ಸಮೂಹದಿಂದ ಹಣ ಸಂಗ್ರಹಿಸುವ ಪರಿಕಲ್ಪನೆಗಳಿವು. ಹಳ್ಳಿಗಳಲ್ಲಿ ದೇವಸ್ಥಾನ ಕಟ್ಟಿಸುವಾಗ  ರೀತಿ ‘ಕ್ರೌಡ್ ಫಂಡಿಂಗ್’ ಪರಿಕಲ್ಪನೆ ತಣ್ಣಗೆ ಜಾರಿಗೆ ಬಂದಿರುವುದನ್ನು ನಾವು ಕಂಡಿದ್ದೇವೆಗಣೇಶನನ್ನು ಕೂರಿಸುವ ಹುಡುಗರು ಮಾಡುವುದೂ ಒಂದು ರೀತಿಯಲ್ಲಿ ಇದನ್ನೇಆದರೆಅಲ್ಲಿ ಕೊಟ್ಟ ಹಣವನ್ನು ‘ಹೂಡಿಕೆ’ ಎನ್ನಲಾಗುವುದಿಲ್ಲ.  ‘ಕ್ರೌಡ್ ಫಂಡಿಂಗ್ನಲ್ಲಿ ಸಂಗ್ರಹವಾಗುವ ಹಣಕ್ಕೆ ‘ಬಂಡವಾಳ’ ಎಂಬ ಅರ್ಥ ದಕ್ಕಿದೆ.
ವೆಬ್ ಸೈಟ್ ಗಳುಸಾಮಾಜಿಕ ಜಾಲತಾಣಗಳು `ಅಂಗೈನಲ್ಲಿಆದ ಮೇಲೆ ಅವನ್ನು ಹೂಡಿಕೆಯ ದಾರಿ ಮಾಡಿಕೊಳ್ಳಲು ಮನಸ್ಸು ಮಾಡಿದವರು ಹಲವರುಜನರಿಂದಲೇ ಎಷ್ಟು ಸಾಧ್ಯವೋ ಅಷ್ಟು ಬಂಡವಾಳ ಸಂಗ್ರಹಿಸಿಹಮ್ಮಿಕೊಳ್ಳಬೇಕಾದ ಯೋಜನೆಯನ್ನು ಸಾಕಾರಗೊಳಿಸುವ  ಆಧುನಿಕ ಸಹಕಾರಿ ತತ್ವವೇ `ಕ್ರೌಡ್ ಫಂಡಿಂಗ್'. ಇಲ್ಲಿ ಸಹಕಾರ ಎಂಬುದು ದಾನದ ರೂಪದಲ್ಲೋಸಹಾಯ ಎಂಬುದಾಗಿಯೋ ಇರುವುದಿಲ್ಲಬದಲಿಗೆ ಅದು ಬಂಡವಾಳ ಹೂಡಿಕೆಯಾಗುತ್ತದೆಹಾರ್ಡ್ ವೇರ್ ಅಭಿವೃದ್ಧಿಹೊಸ ಉದ್ಯಮಕ್ಕೆ ಮೂಲ ಬಂಡವಾಳ ಹೊಂದಿಸುವುದುಸಮಾನ ಮನಸ್ಕರು ಸೇರಿ ಪತ್ರಿಕೆಯನ್ನೋ ಚಾನೆಲ್ಲನ್ನೋ ಪ್ರಾರಂಭಿಸುವುದುಕೃತಿಗಳನ್ನು ಪ್ರಕಟಿಸುವುದು-ಹೀಗೆ ಅನೇಕ ಸಾಂಘಿಕ ಕೆಲಸಗಳಿಗೆ ಜನರಿಂದಲೇ ಬಂಡವಾಳ ಸಂಗ್ರಹಿಸಲು ಹಲವು ವೆಬ್ಸೈಟ್ ಗಳು ವೇದಿಕೆಯಾಗಿವೆಸಾಮಾಜಿಕ ಜಾಲತಾಣಗಳು ತೋರುದೀಪಗಳಾಗಿವೆ.

ಮೊದಲನೇ ಪ್ರಯತ್ನ
ಮೊದಲನೇ ಪ್ರಯತ್ನ ಸಮಾಜಕಾರ್ಯ ಕಲಿಯುತ್ತಿರುವಾಗಲೆ ``ಸಮಾಜಕಾರ್ಯದ'' ಗ್ರಾಮೀಣ ಶಿಬಿರಕ್ಕೆ ಅಗತ್ಯವಾದ ವಸ್ತುಗಳನ್ನು ಹಣವನ್ನು ಸಂಗ್ರಹಿಸಲು ಸಮಾಜದ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುತ್ತಿದ್ದೆವು. 10 ಜನ ಸಹಪಾಟಿಗಳು ಪರಿಚಿತರ ನೆರವಿನೊಂದಿಗೆ ಚಂದಾ ದೇಣಿಗೆ ಪಡೆದಾಗ ಚಂದಾ ದೇಣಿಗೆ ಪಡೆಯುವುದು ಸುಲಭದ ಕೆಲಸ ಅನಿಸಿತ್ತುಸಮಾಜಕಾರ್ಯ ಸ್ನಾತಕೋತ್ತರ ಪದವಿ ಪೂರೈಸಿ ವೃದ್ಧಾಶ್ರಮ ಶುರು ಮಾಡಬೇಕೆಂಬ ಕನಸು ಹೊತ್ತು ಚಂದಾ ಹಣ ಸ್ವೀಕರಿಸಲು ನಿರ್ಧರಿಸಿದಾಗ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಬರತೊಡಗಿದವು ಸಮಯದಲ್ಲಿ ನನಗೆ ಅನುಭವದ ಕೊರತೆ ಹಾಗೂ  ವಿಷಯದಲ್ಲಿ ಅನುಭವ ಹೊಂದಿರುವ ಗುರು ಇಲ್ಲಸಮಾಜಕಾರ್ಯದ ಸ್ನಾತಕೋತ್ತರ ಪದವಿ ಪಡೆದಾಗಿನ ತರಗತಿಯ ಅನುಭವ ಸಮಯದಲ್ಲಿ ನನ್ನ ಮೊದಲ ಅನುಭವ ನನ್ನ ಸಮಾಜಕಾರ್ಯ ತರಗತಿಯಲ್ಲಿರುವವರನ್ನೇ ಕೇಂದ್ರೀಕರಿಸಿ ನಾನು ವೃದ್ಧಾಶ್ರಮ ಮಾಡಬೇಕೆಂಬ ನೀವು ಸಹಕರಿಸಿ ಎಂಬ ಮನವಿ ಮುಂದಿಟ್ಟೆಕೆಲವರು ಸ್ಪಂದಿಸಿದರುಹಲವರು ಸ್ಪಂದಿಸದೆ ದೂರವಾದರು.
ನನ್ನ ಅನಿಸಿಕೆಯಲ್ಲಿ ಚಂದಾ ಹಣ ಬೇಡುವುದು ನಿಮ್ಮ ವ್ಯಕ್ತಿತ್ವದ ಭಾಗವಾದ ``Ego''  ಅಹಂನ್ನು ಸಂಪೂರ್ಣವಾಗಿ ನಾಶವಾಗಿಸುವ ಪ್ರಕ್ರಿಯೆಯ ಭಾಗಮೊದಲು ಅಹಂನ್ನು ಜಯಿಸಿ ಸಂಪೂರ್ಣವಾಗಿ ಶರಣಾದ ಮೇಲೆ ಮತ್ತೊಬ್ಬರ ಹತ್ತಿರ ಚಂದ ಕೇಳಲು ಮನಸ್ಸು ಮಾಡಬಹುದು.
ಮೊದಲು ನನಗೆ ಚಂದ ಕೇಳುವುದೆಂದರೆ ಅವಮಾನದ ಸಂಗತಿನನ್ನನ್ನು ಒಬ್ಬ ಭಿಕ್ಷುಕನ ರೀತಿ ಜನ ನೋಡಿದರೆನನ್ನ ಬಗ್ಗೆ ತಪ್ಪು ಅಭಿಪ್ರಾಯ ವ್ಯಕ್ತಪಡಿಸಿದರೆನನ್ನನ್ನು ಕೀಳಾಗಿ ಕಂಡರೆ ಹೀಗೆ ಮನಸ್ಸು ತವಕಿಸುತ್ತದೆಗೊಂದಲಕ್ಕೆ ಸಿಲುಕುತ್ತದೆ ಎಲ್ಲಾ ಗೊಂದಲ ತವಕ ತಲ್ಲಣಗಳನ್ನು ಅನುಭವಿಸಿ ನಂತರ ನಾನು ನನ್ನ ಸ್ವಾರ್ಥಕ್ಕಾಗಿ  ಚಂದಾ ಹಣ ಕೇಳುತ್ತಿಲ್ಲ ಒಂದು ಒಳ್ಳೆಯ ಕಾರ್ಯಕ್ಕೆ  ಚಂದಾ ಹಣ ಕೇಳುತ್ತಿದ್ದೇನೆಅಂಜಿಕೆ ಏಕೆಎಂಬ ಬೆಳ್ಳಿರೇಖೆ ಕಾಣತೊಡಗುತ್ತದೆ ಆತ್ಮವಿಶ್ವಾಸ ನನ್ನದಾಗಲು ನಾವು ಮಾಡುತ್ತಿರುವ ಕೆಲಸ ಸಮಾಜಮುಖಿಯಾಗಿರಬೇಕುಸಮಾಜಮುಖಿಯಾಗಿರದಿದ್ದರೆ ಸಂಸ್ಥೆ ಸಮಾಜಮುಖಿ ಎಂದು ಅನಿಸಿದ ಮೇಲೆ ಚಂದಾ ಕೇಳಲು ಸ್ವಲ್ಪ ಧೈರ್ಯ ಬರುತ್ತದೆ.

ಎರಡನೆ ಪ್ರಯತ್ನ
ಎರಡನೆ ಬಾರಿ ಚಂದಾ ಕೇಳಲು ನಿರ್ಧರಿಸಿದ್ದೆಮಾಜಿ ಪ್ರಧಾನಿಗಳನ್ನು ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ``ವೃದ್ಧಾಶ್ರಮ''  ಕೆಲಸಕ್ಕೆ ಚಂದಾ ನೀಡಲು ಮಾಜಿ ಪ್ರಧಾನಿಗಳು ನಿರಾಕರಿಸುವರೆ ? ಖಂಡಿತ ನಮಗೆ ಚಂದಾ ಹಣ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸಮಾಜಿ ಪ್ರಧಾನಿಗಳ ಮನೆಗೆ ಭೇಟಿ ನೀಡಿದ್ದು ಬೆಳಗ್ಗೆ ಸುಮಾರು 10 ಗಂಟೆಗೆನಾವು ಭೇಟಿಯಾಗಿದ್ದು 1.30 ನಿಮಿಷಕ್ಕೆನಮ್ಮ ಕೈಯಲ್ಲಿದ್ದ ವೃದ್ಧಾಶ್ರಮದ Brochure ನೀಡಿ ನಾವು ಸಮಾಜಕಾರ್ಯ ಸ್ನಾತಕೋತ್ತರ ಪದವೀಧರರುದಯಮಾಡಿ ನಾವೊಂದು ವೃದ್ಧಾಶ್ರಮ ಮಾಡಿದ್ದೇವೆನೀವು ನಿಮ್ಮ ಸಲಹೆ ಹಾಗೂ ಚಂದಾಹಣ ನೀಡಬೇಕು ಎಂದು ಮನವಿ ಮಾಡಿದೆವುನಮ್ಮನ್ನು ಕುಳಿತುಕೊಳ್ಳಲು ಹೇಳದೆನೀವು ಮಹತ್ಕಾರ್ಯ ಮಾಡಲು ಹೊರಟಿದ್ದೀರನಿಮಗೆ ಶುಭವಾಗಲಿ ಎಂದು ಹರಸಿದರುಚಂದಾ ಹಣದ ಬಗ್ಗೆ ಏನನ್ನು ಪ್ರಸ್ತಾಪಿಸಲಿಲ್ಲನಿರಾಶೆಯಾಯಿತುಹೊರಗಡೆ ಬಂದು ನಾವು ಸುಮಾರು 40 K.M. ನಿಂದ ಬಂದ ಪೆಟ್ರೋಲ್ ಖರ್ಚುನಮ್ಮ ಪಾಕೆಟ್ ನಿಂದ ಹೋಯಿತಲ್ಲಮಾಜಿ ಪ್ರಧಾನಿಗಳು ಸ್ನಾತಕೋತ್ತರ ಪದವಿ ಪಡೆದು ಸಮಾಜಮುಖಿಯಾಗಿ ಕೆಲಸ ಮಾಡಲು ಹೊರಟ ನಮ್ಮನ್ನು ಇತರೆ ಚಂದಾ ಕೇಳಲು ಬಂದವರಂತೆ ಪರಿಗಣಿಸಿದರಲ್ಲಚಂದಾ ಹಣ ತರುವುದು ಇಷ್ಟೊಂದು ಕಷ್ಟವೇ ? ಪ್ರಶ್ನೆಗಳ ಸುರಿಮಳೆ ನಮ್ಮನ್ನು ಆವರಿಸಿ ದಾರಿಯುದ್ದಕ್ಕೂ ತಲೆ ಕೊರೆಯುತ್ತಿದ್ದವುಮಧ್ಯಾಹ್ನ ಊಟ ಮಾಡಲು ಮನಸ್ಸಾಗಲಿಲ್ಲನಮಗೆ ನಮ್ಮ ಮೇಲಿದ್ದ ಆತ್ಮವಿಶ್ವಾಸ ಕರಗಿ ನಮ್ಮ ಬೆವರಿನಲ್ಲಿ ಹರಿದುಹೋಯಿತು.

ಮೂರನೆ ಪ್ರಯತ್ನ
ಮೂರನೆ ಪ್ರಯತ್ನವಾಗಿ ನಮ್ಮ ತಂತ್ರಗಾರಿಕೆ ಬದಲಾಯಿಸಬೇಕು ಎಂದು ನಿರ್ಧರಿಸಲಾಯಿತುಆಗ ತಾನೆ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದು ಹೊಸ ಸರ್ಕಾರ ಬಂದಿತ್ತುಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ನಮ್ಮ ವೃದ್ಧಾಶ್ರಮ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿತ್ತು ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರು ಸಮಾಜಕಾರ್ಯ ಸ್ನಾತಕೋತ್ತರ ಪದವೀಧರರು ಹಾಗೂ ಕರ್ನಾಟಕ ಸರ್ಕಾರದ ಮಂತ್ರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದರುಇದನ್ನು ಅರಿತ ನಾವು  ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕುಖಂಡಿತ ವೃತ್ತಿಪರ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಂತ್ರಿಗಳು ನಮಗೆ ಖಂಡಿತ ಸ್ಪಂದಿಸುವರು ಎಂಬ ಭರವಸೆ ಹೊತ್ತು ಸುಮಾರು 15 ಜನ ನನ್ನ MSW ಸ್ನೇಹಿತರನ್ನೊಳಗೊಂಡು ಶಾಸಕರ ಭವನದಲ್ಲಿ ಮಂತ್ರಿಗಳನ್ನು ಚಂದಾಹಣ ನೀಡಬೇಕೆಂದು ಕೇಳಲು ನಿರ್ಧರಿಸಿ ಶಾಸಕರ ಭವನಕ್ಕೆ ಭೇಟಿ ನೀಡಿದೆವುಸುಮಾರು 2 ಗಂಟೆ ಕಾದ ಮೇಲೆ ಮಂತ್ರಿಗಳು ಆಗಮಿಸಿದರುಸುಮಾರು 15 ಜನ ಮಂತ್ರಿಗಳಲ್ಲಿ ಅವರವರ ಸಮಸ್ಯೆ ಕೇಳಿಕೊಂಡರುನಮ್ಮ ಹೆಸರನ್ನು ಕರೆದರುಮೇಡಂನಾವೆಲ್ಲ ಸಮಾಜಕಾರ್ಯ ಸ್ನಾತಕೋತ್ತರ ಪದವೀಧರರುವೃದ್ಧಾಶ್ರಮ ಸ್ಥಾಪಿಸಿದ್ದೇವೆ ವೃದ್ಧಾಶ್ರಮ ನಿಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆಹಾಗಾಗಿ ತಾವು ನಮ್ಮ ವೃದ್ಧಾಶ್ರಮಕ್ಕೆ ಭೇಟಿ ನೀಡಬೇಕು ಎಂದು ಹಾಗೂ ನೀವು ಚಂದಾ ಹಣ ನೀಡಬೇಕು ಎಂದು ಮನವಿ ಮಾಡಿದೆವು ಮನವಿಗೆ ಮಂತ್ರಿಗಳು ಚಂದಾ ನೀಡುವ ಶಕ್ತಿ ನನ್ನಲ್ಲಿಲ್ಲ ಎನ್ನುವ ಉತ್ತರ ನೀಡಿದರುಮತ್ತು Next ಯಾರಿದ್ದಾರಪ್ಪ ಎಂದು ತಮ್ಮ ಆಪ್ತ ಸಹಾಯಕನನ್ನು ಕರೆದರು ಕರೆ ನೀವು ದಯಮಾಡಿ ಇಲ್ಲಿಂದ ಜಾಗ ಖಾಲಿ ಮಾಡಿ ಎಂಬ ಸೂಚನೆಯಂತಿತ್ತುಬೆಳಗಿನ ಉಪಾಹಾರ ಮಾಡದೆ ಶಾಸಕರ ಭವನ ತಲುಪಿದ ನಮಗೆ ಮಂತ್ರಿಗಳ ಮಾತು ಕೇಳಿ ಹೊಟ್ಟೆ ತುಂಬಿದ ಅನುಭವವಾಗಿತ್ತು.

 ಮೇಲಿನ ಅನುಭವಗಳು ನನಗೆ ಕಲಿಸಿದ ಪಾಠಗಳು,
1.         ದೊಡ್ಡವರನ್ನು ಚಂದಾ ಕೇಳಿದರೆ ಚಂದಾಹಣ ಸಿಗುತ್ತವೆ ಎಂಬುದು ಭ್ರಮೆ.
2.         ನೀವು ಎಷ್ಟು ಒಳ್ಳೆಯ ಕೆಲಸ ಮಾಡಿ ನಿಮಗೆ ಚಂದಾ ಹಣ ಸಿಗದಿರಬಹುದು.
3.         ಚಂದಾ ಹಣ ಕೂಡದಿದ್ದರೆ ನೀವು ಬೇಸರ ಮಾಡಿಕೊಂಡು ತಲೆ ಕೆಡಿಸಿಕೊಳ್ಳಬೇಕಾದ ಅನಿವಾರ್ಯವಿಲ್ಲ.
4.         ಚಂದ ಕೊಡದವರ ಬಗ್ಗೆ ಅಪಪ್ರಚಾರ ಮಾಡಿ ಅವರನ್ನು ಅವಮಾನಿಸುವದನ್ನು ಬೆಳೆಸಿಕೊಳ್ಳಬೇಡಿ.